ರಾಮನಗರ: ಸುರಕ್ಷತೆ ಮತ್ತು ಸುಸ್ಥಿರತೆ ಎಲ್ಲರ ಆದ್ಯತೆಯಾಗಬೇಕು. ರಸ್ತೆ ಸುರಕ್ಷೆಯ ಬಗ್ಗೆ ಸಮಾಜವನ್ನು ಜಾಗೃತಗೊಳಿಸಲು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ಹೇಳಿದರು.
ಭಾನುವಾರ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಮೋಟಾರ್, ಬಿಐಎ ಫೌಂಡೇಶನ್ ಸಹಯೋಗದೊಂದಿಗೆ ಟೊಯೊಟಾ ಗ್ರೇಟರ್ ಬೆಂಗಳೂರು ಬಿಡದಿ ಹಾಫ್ ಮ್ಯಾರಥಾನ್ 2024ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಟೊಯೋಟಾ, ಬಿಐಎ ಪೌಂಡೇಶನ್ ಹಮ್ಮಿಕೊಂಡಿರುವ ಮ್ಯಾರಥಾನ್ ಸಾಕಷ್ಟು ಸಹಕಾರಿಯಾಗಲಿದೆ. ಮ್ಯಾರಥಾನ್ ನಲ್ಲಿ ಸಾವಿರಾರು ಮಂದಿ ಉತ್ಸಾಹದಿಂದ ಭಾಗವಹಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಟಿಕೆಎಂನ ಹಿರಿಯ ಉಪಾಧ್ಯಕ್ಷ ಸುದೀಪ್ ಎಸ್ ದಾಲ್ವಿ ಅವರು ಮಾತನಾಡಿ ಮ್ಯಾರಥಾನ್ ಸುರಕ್ಷತೆ, ಸುಸ್ಥಿರತೆ ಮತ್ತು ಸಮುದಾಯ ಅಭಿವೃದ್ಧಿಗೆ ನೆರವಾಗಲಿದೆ. ನಾವು ಫಿಟ್ನೆಸ್ ಮತ್ತು ಆರೋಗ್ಯಕರ ಜೀವನವನ್ನು ಉತ್ತೇಜಿಸುವುದಲ್ಲದೆ, ಸಮುದಾಯದಲ್ಲಿ ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ಏಕತೆಯ ಪ್ರಜ್ಞೆಯನ್ನು ಬೆಳೆಸುವ ವೇದಿಕೆಯನ್ನು ರಚಿಸಿದ್ದೇವೆ ಎಂದರು.
ಮ್ಯಾರಥಾನ್ 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 21 ಕಿ.ಮೀ, 10 ಕಿ.ಮೀ ಮತ್ತು 5 ಕಿ.ಮೀ ಮತ್ತು 8 ರಿಂದ 15 ವರ್ಷದೊಳಗಿನ ಮಕ್ಕಳಿಗೆ 3 ಕಿ.ಮೀ ವಿಶೇಷ ವಿಭಾಗದಲ್ಲಿ ನಡೆಯಿತು. ಗುರಿಯನ್ನು ತಲುಪಿದ ಎಲ್ಲಾ ಓಟಗಾರರಿಗೆ ಪದಕಗಳು ಮತ್ತು ಇ-ಪ್ರಮಾಣಪತ್ರಗಳನ್ನು ಪಡೆದರೆ, ಉತ್ತಮ ಪ್ರದರ್ಶನ ನೀಡಿದವರಿಗೆ ನಗದು ಬಹುಮಾನಗಳನ್ನು ನೀಡಲಾಯಿತು.
ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವ ಕುಮಾರ್, ಕಿರ್ಲೋಸ್ಕರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷರಾದ ಗೀತಾಂಜಲಿ ಕಿರ್ಲೋಸ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಬಿಐಎ ಹಿರಿಯ ಅಧಿಕಾರಿಗಳು ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ಹಿರಿಯ ನಾಯಕರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)
ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚಂದ್ರ ತೇಜಸ್ವಿ ರವರ "ಅಣ್ಣನ ನೆನಪು" ನಾಟಕವು ಅದ್ಭುತವಾಗಿ ಪ್ರದರ್ಶನ ಕಂಡಿತು. ಇನ್ನಷ್ಟು ಉತ್ತಮಗೊಳ್ಳಲು ಶತಮಾನೋತ್ಸವ ಭವನದ ತಾಂತ್ರಿಕತೆಯ ವಿಫಲತೆಯಿಂದ ಪೇಲವವಾಯಿತು.
ಕುವೆಂಪು ಮತ್ತು ತೇಜಸ್ವಿ ರವರ ವಿಚಾರಧಾರೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ತಂಡ ವಿಫಲವಾಯಿತೆನ್ನಲಡ್ಡಿಯಿಲ್ಲ. ಬ್ರಾಹ್ಮಣ್ಯವಿರಲಿ ತುಳಿತಕ್ಕೊಳಗಾದ ಶೂದ್ರರೇ ನಮ್ಮ ಮೇಲೆ ಮುಗಿ ಬೀಳುತ್ತಾರೇನೋ ಎಂಬ ಭಯ ಕಾಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನಗಳು ಉಳಿಯಲಿಲ್ಲ.
ನಾಟಕದ ನಿರೂಪಣೆಯನ್ನು ಪೂಚಂತೇ ರವರ ಪಾತ್ರಧಾರಿಯೇ ನಿರ್ವಹಿಸಿಕೊಂಡು ನಾಟಕದಲ್ಲಿ ಅಭಿನಯಿಸಿದ್ದು ಚಂದವಾಗಿತ್ತು, ಮನೆಗೆಲಸದ ಬೋರಮ್ಮ ನ ಧ್ವನಿ ಹೊರತುಪಡಿಸಿ ಮಿಕ್ಕೆಲ್ಲಾ ಪಾತ್ರಧಾರಿಗಳ ಧ್ವನಿ ಕ್ಷೀಣವಾಗಿತ್ತು. ಅದಕ್ಕೆ ಭವನದ ತಾಂತ್ರಿಕತೆಯೇ ಕಾರಣ ಎಂಬುದನ್ನು ಆಯೋಜಕರು, ನಾಟಕ ತಂಡ ಹಾಗೂ ಭವನದ ಆಡಳಿತ ಮಂಡಳಿ ಒಪ್ಪಿಕೊಂಡಿದೆ.
ದಾನಿಗಳ ಹಾಗೂ ಟಿಕೆಟ್ ಮಾರಾಟದಿಂದ ಮುನ್ನೂರಕ್ಕೂ ಹೆಚ್ಚು ಜನ ಸೇರಿಸುವಲ್ಲಿ ಆಯೋಜಕರಾದ ಅಂಕಯ್ಯ ನಾಗವಾರ ಸರ್, ಡಾ ಕೂಡ್ಲೂರು ವೆಂಕಟಪ್ಪ ಸರ್ ಸೇರಿದಂತೆ ವಿಚಾರವಾದ ಮಂಡಿಸುವ ಕೆಲ ಯುವಕರು ಸೇರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಕುವೆಂಪು ಮತ್ತು ಪೂಚಂತೇ ರವರ ನಾಟಕಕ್ಕೆ ಹೆಚ್ಚು ಜನ ಸೇರಲಿಲ್ಲವಲ್ಲಾ ಎಂಬುದೇ ದೊಡ್ಡದಾಗಿದೆ.
*ವಿಚಾರ ಎಂಬುದನ್ನು ಹರಿಯಬಿಡಬೇಕೆ ವಿನಹ ಕಟ್ಟಿಹಾಕಬಾರದು*
ಉತ್ತರದ ಜೆಪಿ, ಲೋಹಿಯಾ ರವರಂತೆ ದಕ್ಷಿಣದ ಪೆರಿಯಾರ್, ಕುವೆಂಪು, ಪೂಚಂತೇ, ಪ್ರೊ ನಂಜುಂಡಸ್ವಾಮಿ ಸೇರಿದಂತೆ ಹಲವಾರು ಮಹನೀಯರು ವಿಚಾರವನ್ನು ಸಾರಿದ್ದಾರೆ. ಅವರ ವಿಚಾರಧಾರೆಗಳು ಈಗಾಗಲೇ ಮರೆತು ಹೋಗುತ್ತಿವೆ. ಇವರ ವಿಚಾರಧಾರೆಗಳನ್ನು ಯುವ ಸಮುದಾಯಕ್ಕೆ ಮುಟ್ಟಿಸಬೇಕು. ಇದಕ್ಕೆ ಹಲವಾರು ಮುಖ್ಯವಾಹಿನಿಗಳ ಜೊತೆಗೆ ಸಾಮಾಜಿಕ ಜಾಲತಾಣ ಬಹಳ ಮುಖ್ಯವಾಹಿನಿಯಾಗಿದೆ. ಇದರ ಮುಖೇನ ಯುವ ಸಮುದಾಯವನ್ನು ವಿಚಾರವಂತಿಕೆಗೆ ಕರೆತರಬೇಕಾಗಿದೆ.
ನಗರದಲ್ಲಿ ನಡೆದ ಅಣ್ಣನ ನೆನಪು ನಾಟಕದಲ್ಲಿದ್ದ ಮುನ್ನೂರಕ್ಕೂ ಹೆಚ್ಚು ಮಂದಿಯಲ್ಲಿ, ಹದಿನೆಂಟರಿಂದ ಇಪ್ಪತ್ತೈದು ವಯಸ್ಸಿನ ವಿದ್ಯಾರ್ಥಿಗಳು ಬೆರಳೆಣಿಕೆಯಷ್ಟಿದ್ದರೆ, ಇಪ್ಪತ್ತೈದರಿಂದ ನಲವತ್ತು ವಯಸ್ಸಿನ ಯುವಸಮೂಹ ಕಣ್ಣಳತೆಯಲ್ಲಿ ಲೆಕ್ಕ ಹಾಕುವಷ್ಟಿತ್ತು. ಇನ್ನುಳಿದವರೆಲ್ಲರೂ ನೆರೆತವರಾಗಿದ್ದರು. ಅಂದರೆ ಇವರೆಲ್ಲರೂ ಕುವೆಂಪು, ಪೂಚಂತೆ ಸಮೇತ ಒಂದಷ್ಟು ವಿಚಾರಗಳನ್ನು ಮೈಗೂಡಿಸಿಕೊಂಡವರಿದ್ದರು. ತಿಳುವಳಿಕೆವುಳ್ಳವರಾಗಿದ್ದರು. ಇವರ ಜೊತೆಗೆ ಅಥವಾ ಮುಂದಿನ ಸರದಿ ಯಾರಿಗೆ ಎಂಬುದು ಇಲ್ಲಿ ಬಹಳ ಮುಖ್ಯ. ಆದರೆ ಇದಾಗದಿರುವುದು. ನಾಟಕ ನಮ್ಮ ತಂಡಕ್ಕೆ ಮಾತ್ರ ಸೀಮಿತ, ಬೇಕಾದವರು ಇಲ್ಲಿಯೇ ಬಂದು ನೋಡಲಿ ಎಂಬುದು ಸರಿಯಲ್ಲಾ ಎಂಬುದು ನನ್ನ ನಿರ್ವಿವಾದ.
ಈ ಮೊದಲೇ ಹೇಳಿದಂತೆ ವಿಚಾರಧಾರೆಗಳು ಈಗ ಬೇಕಿರುವುದು ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ, ಎಲ್ಲರೂ ಆ ಸಮಯಕ್ಕೆ ಬರಲಾಗುವುದಿಲ್ಲ. ಹಾಗಂತ ಮುಂದೆ ಎಲ್ಲೋ ಪ್ರದರ್ಶನಗೊಳ್ಳುವ ತನಕ ಕಾಯಲಾಗುವುದಿಲ್ಲ. ಕಾದರೂ ದೂರ ಎನ್ನುವ ಕಾರಣಕ್ಕೆ ಹೋಗದೆ,ಈ ವಿಚಾರಗಳು, ತಿಳಿದುಕೊಂಡ, ನಿವೃತ್ತಿ ಹೊಂದಿದವರ ಜೊತೆಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ ಯೇ ಉಳಿದುಕೊಂಡು ಬಿಡುತ್ತದೆ. ಅದಕ್ಕೆ ಅವಕಾಶ ಕೊಡದೆ ವಿಚಾರ ಅರಿಯದವರಿಗೆ ಮುಟ್ಟಿಸುವ ಪ್ರಯತ್ನ ಮಾಡಬೇಕೆಂದು ನನ್ನ ಮನದಿಚ್ಚೆಯಾಗಿದೆ.
-ಗೋ ರಾ ಶ್ರೀನಿವಾಸ...
ಮೊ:9845856139.
ರಾಮನಗರ: ನಾವು ಹಣಕ್ಕಾಗಿ ಆಸ್ಪತ್ರೆ ನಡೆಸುವುದಿಲ್ಲ, ಇದೊಂದು ಸೇವೆ ಎಂದು ಪರಿಗಣಿಸಿ ಆಸ್ಪತ್ರೆ ನಡೆಸುತ್ತಿದ್ದೇವೆ. ಬೆಂಗಳೂರು ಮೈಸೂರು ಸೇರಿದಂತೆ ನಾಲ್ಕು ಕಡೆಯಲ್ಲಿ ನಮ್ಮ 'ಕಾಂಗರೂ' ಆಸ್ಪತ್ರೆ ಈಗಾಗಲೇ ಕೆಲಸ ನಿರ್ವಹಿಸಿ ಹೆಸರುವಾಸಿಯಾಗಿದೆ. ಈ ಎರಡು ಬೃಹತ್ ನಗರಗಳ ನಡುವಿನ ರಾಮನಗರ ದಲ್ಲಿ "ರೋಟರಿ ಬಿಜಿಎಸ್ ಕಾಂಗರೂ" ಹೆಸರಿನಲ್ಲಿ ಐದನೇ ಆಸ್ಪತ್ರೆ ತೆರೆಯಲಾಗಿದೆ. ಇದನ್ನು ರೋಗಿಗಳು ಉಪಯೋಗಿಸಿಕೊಳ್ಳಬೇಕು ಎಂದು ಸಿಇಓ ಮತ್ತು ಸಂಸ್ಥಾಪಕರಾದ ಡಾ ಶೇಖರ್ ಸುಬ್ಬಯ್ಯ ತಿಳಿಸಿದರು.
ಅವರು ಆಸ್ಪತ್ರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಮ್ಮದು ಜನರಲ್ ಆಸ್ಪತ್ರೆಯಲ್ಲಾ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಾಗಿದ್ದು, ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು ದಿನದ ಇಪ್ಪತ್ನಾಲ್ಕು ಗಂಟೆಗಳು ಉಪಸ್ಥಿತರಿರುತ್ತಾರೆ. ಹೊರರೋಗಿಗಳಿಗೂ ಸಹ (ಓಪಿಡಿ) ಅದೇ ಸಮಯ ನಿಗದಿಯಾಗಿರುತ್ತದೆ. ರಾಮನಗರ ಅಷ್ಟೇ ಅಲ್ಲದೆ, ಸುತ್ತಮುತ್ತಲಿನ ರೋಗಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
*ಕರುನಾಡು ಟೈಮ್ಸ್ ಚಾನೆಲ್ ನಲ್ಲಿ ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ; ಮೊ:97 4242 4949*
ಸ್ತ್ರೀಯರು ಗರ್ಭಿಣಿಯರಾದ ಮೊದಲ ದಿನದಿಂದಲೂ ಹೆರಿಗೆಯಾಗುವ ತನಕ, ಶಿಶುವಿಗೆ ಯಾವ್ಯಾವ ಹಂತದಲ್ಲಿ ಏನೇನು ಚಿಕಿತ್ಸೆ ಅವಶ್ಯಕತೆ ಇದೆಯೋ ಅದೆಲ್ಲವನ್ನು ನಮ್ಮ ಆಸ್ಪತ್ರೆಯಲ್ಲೇ ನೀಡಲಾಗುವುದು. ಎಂತಹ ಸಂದರ್ಭದಲ್ಲೂ ಬೆಂಗಳೂರಿನ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲಾ, ತಾಯಿ ಮತ್ತು ಮಗುವಿಗೆ ಬೇಕಾದ ಎಲ್ಲಾ ಚಿಕಿತ್ಸಾ ಸೌಲಭ್ಯಗಳನ್ನು ನಮ್ಮ ಆಸ್ಪತ್ರೆ ಹೊಂದಿದೆ ಎಂದರು.
ಶುಕ್ರವಾರ ಆಸ್ಪತ್ರೆಯನ್ನು ಅಧಿಕೃತವಾಗಿ ಉದ್ಘಾಟಿಸಿ ಕಾರ್ಯಾರಂಭ ಮಾಡಲಾಗುವುದು. ಸ್ವಾಮೀಜಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರು ಸಹ ಭಾಗವಹಿಸಬೇಕೆಂದು ಮನವಿ ಮಾಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.